Viser resultater for "shrunga b v"
Viser 1 - 8 af 8 resultater
Voksenindhold er synligt.
- af
- Ahoratra
- Fortalt af
- Shrunga B V
Uforkortet
6 timer 22 min
2022
KN
'ಮೂರ್ಖನ ಮಾತುಗಳು' ದೇವ- ದೇಶ-ದೇಹ, ಅಹೋರಾತ್ರ ಅವರ ಅನುಭವಾತ್ಮಕ ಲೇಖನಗಳ ಸಂಕಲನ. ನಮಗೆ ಗೊತ್ತಿರೋದು ಜ್ಞಾನ ಅಲ್ಲ. ನಮಗೆ ಗೊತ್ತಲ್ಲದೇ ಇರೋದು ಜ್ಞಾನ ಅನ್ನೋ ವಿವೇಚನೆ ವಿನಮ್ರತೆಯಲ್ಲಿ ತಮ್ಮನ್ನು ತಾವು ಮೂರ್ಖ ಅಂತಾ ಕರೆದುಕೊಳ್ಳೋ ಅಹೋರಾತ್ರ , ತಮ್ಮ ಅನುಭವಗಳನ್ನು ಲೇಖನಗಳಲ್ಲಿ ದಾಖಲಿಸಿದ್ದಾರೆ. ದೇವ-ದೇಶ-ದೇಹ ಎಂಬ ಉಪಶೀರ್ಷಿಕೆ ಹೊಂದಿರುವ ಈ ಕೃತಿಯಲ್ಲಿ ಎಲ್ಲರ ಸುದೈವ-ದುರ್ದೈವಗಳ ಬಗ್ಗೆಯೂ, ದೇಶ ಮತ್ತು ನಮ್ಮ ಹುಟ್ಟಿನ ಉದ್ದೇಶಗಳ ಬಗ್ಗೆಯೂ, ದೇಹ ಮತ್ತು ಅದರ ಬಗ್ಗೆ ನಮಗಿರುವ ಸಂದೇಹಗಳ ಬಗ್ಗೆಯೂ ಓದುಗರಿಗೆ ಪರಿಚಯಿಸಿದ್ದಾರೆ.
55,00 kr.
- Fortalt af
- Shrunga B V
Uforkortet
14 timer 48 min
2023
KN
ಪ್ರಮುಖ ಕಾದಂಬರಿಕಾರ, ಚಿಂತಕರಾದ ಎಸ್.ಎಲ್. ಭೈರಪ್ಪನವರ 'ಅಂಚು' ಕಾದಂಬರಿಯು 1990ರಲ್ಲಿ ರಚನೆಯಾಗಿದೆ. ಜೀವನಪ್ರೀತಿ ಮತ್ತು ಸಾವಿನ ಪ್ರಪಾತಗಳ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಲು ಬೇಕಾದ ಪ್ರೀತಿಯು ಈ ಕ್ರೌರ್ಯಕ್ಕೆ ವಿರುದ್ಧ ತೂಕವನ್ನು ಸೃಷ್ಟಿಸುತ್ತದೆ. ಈ ಸ್ಥೂಲವಸ್ತುವಿನ ಹಂದರದಲ್ಲಿ ಸ್ಫುಟವಾಗಿ ನಿಲ್ಲುವ ಪಾತ್ರಗಳು, ಮಾನವ ಸನ್ನಿವೇಶಗಳು ಹಾಗೂ ಮನಃಪ್ರವೃತ್ತಿಯ ಗುಹ್ಯಸ್ಥಾನಗಳಿಗೆ ಟಾರ್ಚ್ ಹಾಕಿ ತೋರಿಸುವ ತಂತ್ರವಿಶ್ಲೇಷಣೆಗಳಿಂದ ಬೈರಪ್ಪನವರು ಈ ಕಾದಂಬರಿಯಲ್ಲಿ ಹೊಸ ದ್ರವ್ಯ ಹಾಗೂ ವಿಧಾನಗಳನ್ನು ಆವಿಷ್ಕರಿಸಿದ್ದಾರೆ. ಕಾದಂಬರಿಯಲ್ಲಿ ಎರಡು ಪಾತ್ರಗಳು ವಿವಿಧ ಸಂಧರ್ಭಗಳಲ್...
139,00 kr.
- Fortalt af
- Shrunga B V
Uforkortet
11 timer 8 min
2021
KN
'ಎನ್ ಕೌಂಟರ್' ಕುಂ.ವೀರಭದ್ರಪ್ಪ ಅವರು ಬರೆದಿರುವ ನೈಜ ಘಟನೆಯಾಧಾರಿತ ಕಾದಂಬರಿ. ಈ ಕತೆಯ ಮೂಲ ಹುಟ್ಟಿದ್ದು ಐಪಿಎಸ್ ಅಧಿಕಾರಿ ಶಂಕರ ಬಿದರಿಯವರು ಹೇಳಿದ ನೈಜ ಘಟನೆಯೊಂದರಿಂದ ಎನ್ನುತ್ತಾರೆ ಕಾದಂಬರಿಕಾರ ಕುಂವೀ. ಶಂಕರ ಬಿದರಿಯವರು ಬಳ್ಳಾರಿಯಲ್ಲಿ ಭೀಮ್ಲಾ ನಾಯಕ್ ಹೆಸರಿನ ಕುಖ್ಯಾತನನ್ನು ಎನ್ ಕೌಂಟರ್ ಮಾಡಿದ್ದು 1990, ಸೆಪ್ಟೆಂಬರ್ ಮಾಹೆಯಲ್ಲಿ. ಆ ಎನ್ ಕೌಂಟರ್ ನ ನೆನಪುಗಳನ್ನು ಲೇಖಕ ಕುಂ.ವೀರಭದ್ರಪ್ಪನವರಲ್ಲಿ ಹಂಚಿಕೊಂಡ ಬಿದರಿ ಅವರು 'ಈ ಕುರಿತು ಬರೆಯಿರಿ ' ಎಂದು ತಿಳಿಸಿದ ಕಾರಣದಿಂದ ಈ ಕಾದಂಬರಿಯನ್ನು ಬರೆದದ್ದಾಗಿಯೂ ಲೇಖಕರು ತಿಳಿಸಿದ್ದಾರೆ. ಭೀಮ್ಲಾ ನಾಯಕ ಕ್ರಿಮಿನಲ್ ಕೃತ್ಯಗಳನ್ನು ಮೈಮೇಲೆಳೆದುಕೊಂಡ...
75,00 kr.
- Fortalt af
- Shrunga B V
- Oversat af
- Rashmi Terdal
Uforkortet
8 timer 16 min
2021
KN
ಕನ್ನಡ ಸಾಹಿತ್ಯ ಲೋಕದಲ್ಲಿ ಸಲಿಂಗಿಗಳ ಬಗ್ಗೆ ಪರಿಚಯಿಸುವ ಮೂಲಕ ಹೊರಬಂದ ಮೋಹನಸ್ವಾಮಿ ಕೃತಿಯು ಲೇಖಕರ ಆತ್ಮಕತೆಯೂ ಹೌದು. " 'ಮೋಹನಸ್ವಾಮಿ' ಹನ್ನೊಂದು ಸಣ್ಣ ಕಥೆಗಳು ಹಾಗು ಒಂದು ಪದ್ಯವನ್ನೊಳಗೊಂಡಿದೆ. ಅದರಲ್ಲಿ ಆರು ಕಥೆಗಳು ಮೋಹನಸ್ವಾಮಿಯ ಕುರಿತಾಗಿದ್ದು ಮಿಕ್ಕವು ಬೇರೆ ಪಾತ್ರಗಳನ್ನು ನಿರೂಪಿಸುತ್ತವೆ. 'ತುತ್ತತುದಿಯಲ್ಲಿ ಮೊಟ್ಟಮೊದಲು' ಮೋಹನಸ್ವಾಮಿಯ ಪರಿಚಯಾತ್ಮಕ ಕಥೆಯಾಗಿದ್ದು ಲಿಂಗ ಬದಲಾವಣೆಯ ನಂತರದ ಸಾಮಾಜಿಕ ಜೀವನದಲ್ಲಿ ತನ್ನ ಸತತ ನೋವಿನ ಸೆಲೆಯನ್ನು, ಅಪರಾಧಿ ಮನೋಭಾವನೆಯನ್ನು ಮುಂದಿಡುತ್ತದೆ. 'ಕಗ್ಗಂಟು' ಮೋಹನಸ್ವಾಮಿಯು ತನ್ನ ಪ್ರೇಯಸಿಯನ್ನು ಕಳೆದುಕೊಳ್ಳುವ ಹಾಗು ಒಂದು ಹುಡುಗಿಯ ಒಡನಾಟದ ಕುರಿ...
75,00 kr.
- Fortalt af
- Shrunga B V
Uforkortet
4 timer 34 min
2022
KN
ಡಿಯರ್ ಋಷ್ಯಶೃಂಗ... ಕೆಲವು ಕಲ್ಪಗಳ ಹಿಂದೆ ನಿನ್ನ ಬಗ್ಗೆ ಓದಿದ ನೆನಪು. ನಿನ್ನ ತಲೆಯಲ್ಲಿ ಕೊಂಬಿತ್ತೆಂದು ಒಂದು ಕತೆ. ಜಿಂಕೆಗೆ ಹುಟ್ಟಿದ್ದಕ್ಕೆ ಹೀಗೆಂದು ವ್ಯಾಖ್ಯೆ. ಬರಕ್ಕೀಡಾಗಿ ಕಂಗೆಟ್ಟ ನಾಡಿಗೆ ಮಳೆ ತಂದೆಯೆಂದು ಉಪಾಖ್ಯಾನ. ಜಗತ್
55,00 kr.
- Fortalt af
- Shrunga B V
- Oversat af
- R V Kattimani
Uforkortet
10 timer 52 min
2021
KN
ಶತ್ರುಗಳು ನನ್ನನ್ನು ಕೊಲ್ಲುತ್ತಾರೋ ಅಥವಾ ಹಿಂಸಿಸುತ್ತಾರೋ, ನಾನು ನನ್ನ ರಹಸ್ಯಗಳನ್ನು ಹೇಳುವುದಿಲ್ಲ ... ' ಅದು ಸಿಬಿಐ ಕಚೇರಿಯ ಗೋಡೆಯ ಮೇಲೆ ಒಂದು ಸಣ್ಣ ಉಲ್ಲೇಖವಾಗಿತ್ತು. ಅವಳು ಅದನ್ನು ಸಂಪೂರ್ಣವಾಗಿ ತನ್ನ ಜೀವನಕ್ಕೆ ಅಳವಡಿಸಿಕೊಂಡಳು! ಫಲಿತಾಂಶವು ಹೂಳುನೆಲ !! ಅವಳು ಭಯಾನಕ ಸಮಯ ಹಾವಿನ ವಿಷವನ್ನು ಎದುರಿಸುತ್ತಿದ್ದಾಳೆ ಎಂದು ಅವಳಿಗೆ ತಿಳಿದಿರಲಿಲ್ಲ !! ಅವರ ಕ್ರಮವು ಲಕ್ಷಾಂತರ ಭಾರತೀಯರ ಜೀವವನ್ನು ಉಳಿಸಲು ಹೊರಟಿದೆಯೇ?
75,00 kr.
- Fortalt af
- Shrunga B V
Uforkortet
4 timer 19 min
2021
KN
ಇನ್ನೂ ಒಂದು ಕಾದಂಬರಿಯ ವೈಶಿಷ್ಟ್ಯ ಹಲವು ರೀತಿಯದು. ಹೊಸ ಕಥಾ ವಸ್ತು, ಹೊಸ ಕಥನವಿಧಾನ, ಲೇಖಕರ ವಿಶ್ಲೇಷಣಾ ಸಾಮರ್ಥ್ಯ - ಎಲ್ಲವೂ ಇದನ್ನೊಂದು ಮುಂಚೂಣಿಯ ಕೃತಿಯನ್ನಾಗಿ ಮಾಡಿವೆ. ಪ್ರತಿಯೊಂದು ಪ್ರಬುದ್ಧ ಕೃತಿಯೂ ತನ್ನ ಶೈಲಿಯನ್ನು ವಸ್ತುವಿನ ಜತೆ ಸಮನ್ವಯಗೊಳಿಸುವುದರ ಮೂಲಕ ಕಲಾತ್ಮಕವಾಗುತ್ತದೆ. ಇದನ್ನೇ ಸಾಮಾನ್ಯವಾದ ಭಾಷೆಯಲ್ಲಿ ಕಥನಕಲೆಯೆಂದು ಹೇಳುವುದು. ವಿವೇಕ ಶಾನಭಾಗರಿಗೆ ಇದು ಆರಂಭದ ಕಾದಂಬರಿಯಲ್ಲೇ ಸಿದ್ಧಿಸಿರುವುದು ಮಹತ್ವದ ಸಂಗತಿ. ಅವರು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಮತ್ತು ವಿಚಾರಗಳನ್ನು ತಮ್ಮ ಕಥನಕ್ಕೆ ಒಳಪಡಿಸುವ ಬಗೆ ಅನನ್ಯವಾದುದೇ ಸರಿ. - ಕೆ.ವಿ. ತಿರುಮಲೇಶ್
55,00 kr.
- Fortalt af
- Shrunga B V
Uforkortet
4 timer 15 min
2022
KN
ಲೇಖಕ ಹಾಗೂ ಕಥೆಗಾರ ಸಂತೋಷ ಅನಂತಪುರ ಅವರ ಪ್ರವಾಸ ಕಥನ-'ಸವಾರಿ ಗಿರಿ...ಗಿರಿ. ...' .ಗಗನದಲ್ಲಿ ಸಂಚರಿಪ, ಕಾಪಾಡು ರಜನಿ ದೇವರೇ, ಪಾಟ್ನಾದ ಅಂಧಿಯೂ ಬರೇಲಿಯ ಬಜಾರೂ, ರಾಂಚಿಯ ಲೆಟ್ಟಿ ಮತ್ತು ಕೊಲ್ಕತ್ತಾದ ಕೆಂಪು, ಬೊಕಾರೋದ ಬಿರುಬಿಸಿಲು ಮತ್ತು ಬಡೆದು ಹೋದ ಕಾರಿನ ಟಯರು, ಥಿಂಪುವಿನಲ್ಲಿ ಅನುಭವಿಸಿದ ತಂಪು, ಬಿಳಿ ಕತ್ತಿನ ಕಾಗೆ ಮತ್ತು ಜಾಂಬಿಯಾ, ವಿಂಡುಹೂಕನ ವಿಂಡೋದಲ್ಲಿ, ಸೀತಾ ನದಿ, ಪಡಿಯಾರರ ಬಿಸಿ ಚಹಾ ಹಾಗೂ ಆಶಾವರಿ ರಾಗ ಹೀಗೆ ಒಟ್ಟು 16 ಅಧ್ಯಾಯಗಳಿರುವ ಈ ಪ್ರವಾಸ ಕಥನವು, ತನ್ನ ಸರಳ ಭಾಷೆಯ ಮೂಲಕ ಓದುಗರನ್ನು ಸೆಳೆಯುತ್ತದೆ. ಚಿಂತಕ ನಾಗರಾಜ ರಾಮಸ್ವಾಮಿ ವಸ್ತಾರೆ ಮುನ್ನುಡಿ ಬರೆದು 'ಕಾಸರಗೋಡಿನ ಮೂಲ...
55,00 kr.







